ಕ್ಷೀರ ಸಾಗರ ದ ಮೊದಲ ದಿನದ ನೋಟ.

 

DSC02442

 

DSC02472

DSC02483

DSC02481

 

DSC02470

DSC02460

ಹೆಜ್ಜೆ ಕುಣಿತ

ಹೆಜ್ಜೆ ಕುಣಿತ

ಚಿತ್ರ

M.S. Sathyu

ವ್ಯಾಲಿ ಸ್ಕೂಲ್ – ಬೆಂಗಳೂರಿನ ಕಾರ್ಯಗಾರದಲ್ಲಿ ಎಂ ಎಸ್ ಸತ್ಯು ಅವರೊಂದಿಗೆ

ಚಿತ್ರ

ಸೋಬಾನೆ ಪದಗಳ ಪ್ರತ್ಯಾಕ್ಷಿಕೆ

ಸೋಬಾನೆ ಪದಗಳ ಪ್ರತ್ಯಾಕ್ಷಿಕೆ

ಅನಿತಾ ಹಾಗೂ ಯಂಕಮ್ಮ ಅವರೊಂದಿಗೆ ವಿದ್ಯಾರ್ಥಿನಿ ಶರಣಮ್ಮ ಪೋಲಿಸ್ ಪಾಟೀಲ್ ಮತ್ತು ಗೀತಾ ತುಪ್ಪದ ಶಾಲೆಯಲ್ಲಿ ನಡೆಸಿಕೊಟ್ಟ ತರಬೇತಿ ಕಾರ್ಯಗಾರದ ಜೊತೆಗೆ ಪ್ರತ್ಯಾಕ್ಷಿಕೆ.

ಚಿತ್ರ

ಹೆಜ್ಜೆಗಳು – ಕ್ರೀಡಾಕೂಟ

ತಾಲೂಕು ಮಟ್ಟದ ವ್ಹಾಲಿಬಾಲ್  ಕ್ರೀಡಾಕೂಟ ಗಳನ್ನು ಜಹಗೀರ ಗುಡದುರನಲ್ಲಿ ನಡೆಸಲಾಯಿತು. ಅಧ್ಯಕ್ಷತೆಯನ್ನು ಶ್ರೀ ಮುತ್ತಣ್ಣ ವಾಲಿಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸಿಕೊಂಡಿದ್ದರು. ಉಧ್ಘಾಟನೆಯನ್ನು  ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಶಾಲಾ ಭೂ ದಾನಿಗಳಾದ ಶ್ರೀ ಭೀಮರಾವ್ ಸಾಲುಂಕಿಯವರು ನಡೆಸಿಕೊಟ್ಟರು. ಕ್ರೀಡಾ ಧ್ವಜಾರೋಹಣವನ್ನು ಶ್ರೀ ದಾದ್ಮಿಯರವರು  ನಡೆಸಿಕೊಟ್ಟರು. ೫ ವಲಯಗಳು ಶಾಂತಿಯುತವಾಗಿ ಕ್ರೀಡಾ ಕೂಟಗಳನ್ನು ನಡೆಸಲಾಯಿತು.

ಸ್ವಾತಂತ್ರ್ಯ ದಿನಾಚರಣೆಯ ನಮ್ಮಹೆಜ್ಜೆಗಳು

ImageImageImageImageImageImage

ನಾಟಕ

ನಾಟಕದ ಮರುದಿನ ಕಿವಿಯಲ್ಲಿ ತುಸು ಬಣ್ಣ

ಇರುತ್ತದೆ ಕಣ್ಣಲ್ಲಿ ನಿದ್ದೆ.

ಒದ್ದೆ ಕನಸುಗಳೆಲ್ಲ ಹಗಲಿಗೆ ವರ್ಗಾಯಿಸಲ್ಪಟ್ಟು

ಸೂರ್ಯಾಸ್ತಕ್ಕೆ ಕೆಲವೇ ಕ್ಷಣ ಮುನ್ನ

ಸೂರ್ಯೋದಯದ ರೋಮಾಂಚ. ಎಲ್ಲೋ

ಕಟ್ಟಿದ ಮೋಡಕ್ಕೆ ಇಲ್ಲಿ ಮಬ್ಬು ಮಳೆ ಇಬ್ಬನಿ

ಹೀಗೆ ಹವಮಾನ ಕೈಯಾಚೆ ನಡೆದು ಜಗತ್ತು

ಮುಂದುವರೆಯುತ್ತದೆ ಅಥವಾ ಹಿಂದೆ ಬೀಳುತ್ತದೆ.

ನಾಟಕದ ನಂತರವೇ ಇವೆಲ್ಲ.

ಪ್ರೇಮದ ನಂತರ ಅನ್ನುವ ಹಾಗಿಲ್ಲ

ಹುಟ್ಟಿನ ನಂತರ ಅನ್ನುವ ಹಾಗಿಲ್ಲ. ನಾಟಕದ

ನಂತರ ಅನ್ನಬಹುದು- ಏಕೆಂದರೆ ನಾಟಕ

ಮರುದಿನ ಕಿವಿಯಲ್ಲಿ ತುಸು ಬಣ್ಣ ಇದ್ದದ್ದೆ.

ಕಣ್ಣಲ್ಲಿ ನಿದ್ದೆ.

 

ಹಾಗೆ ನೋಡಿದರೆ ನಾಟಕದ ಮೊದಲು

ಏನಿತ್ತು? ಇದು ತೋಟದ ಮೊದಲು ಏನಿತ್ತು

ಅಂದ ಹಾಗಲ್ಲ. ಅಥವಾ ಸಂಭೋಗದ ಮೊದಲು

ಏನಿತ್ತು ಅಂದ ಹಾಗಲ್ಲ. ಇದು ಸೂರ್ಯೋದಯದ

ಮೊದಲು ಏನಿತ್ತು ಅನ್ನಲು ಹೋಗಿ ಬೆಳಕಿಗೆ

ಅವಾಕ್ಕಾದಂತೆ ಕಿರಣಗಳನ್ನು ನೀರಲ್ಲಿ ಹಿಡಿಯ

ಹೋಗಿ ಮೀನಿಗೆ ಮರಳಾದಂತೆ.

ವಿನಾಕಾರಣ ಅಂಗೈ ಮೇಲಿನ ಗಾಯ

ಮಾಯತೊಡಗಿದಂತೆ. ಏಕೆಂದರೆ ನಾಟಕದ ಮೊದಲು

ನಾಟಕವೇ ಇರಲಿಲ್ಲ. ಬೆಟ್ಟ ಇತ್ತು ನೀರಿತ್ತು ಮೀನಿತ್ತು

ನಾಟಕವೇ ಇರಲಿಲ್ಲ. ಗಾಯವಿತ್ತು ಮಣ್ಣಿತ್ತು ಕಣ್ಣಿತ್ತು

ನಾಟಕವೇ ಇರಲಿಲ್ಲ.

 

– ಜಯಂತ ಕಾಯ್ಕಿಣಿ.

ದಶಮಾನೋತ್ಸವದ ತಯಾರಿ

”  ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ “
ಎಂಬ ಮಾತಿಗೆ ಪುಷ್ಟಿ ನೀಡುತ್ತಿರುವ ಈ ಸರಕಾರಿ ಪ್ರೌಢ ಶಾಲೆ ,
 ಜಹಗೀರ ಗುಡದೂರ. ಶಾಲೆಯು ಈಗ ಕೇವಲ ಹತ್ತು ವರ್ಷದ ಕೂಸು ಇದ್ದಂತೆ. ಆದಾಗ್ಯೂ ಗ್ರಾಮಸ್ಥರ,
 ಎಸ್.ಡಿ.ಎಮ್.ಸಿ. ಯವರ ಮುಖ್ಯಗುರುಗಳ ಹಾಗೂ ಶಿಕ್ಷಕ ಮಿತ್ರರ ಸತತ ಪರಿಶ್ರಮದಿಂದ
ಒಂದು ಪವಿತ್ರ ಶೈಕ್ಷಣಿಕ ಪುಣ್ಯ ಕ್ಷೇತ್ರವಾಗಿ ಬೆಳೆದು ನಿಂತ ಜ್ಞಾನ ದೇವಾಲಯ ಇದಾಗಿದೆ.
ಇನ್ನೂ ಎತ್ತರೋತ್ತರವಾಗಿ ಬೆಳೆಯಲಿ, ಜ್ಞಾನ ದೀಪ ಬೆಳಗಲಿ ಎಂದು ಹಾರೈಸುವೆ.
ಬಸವರಾಜ ಬಾಗಲಿ 
ಶಿಕ್ಷಣ ಸಂಯೋಜಕರು,
ಹನಮನಾಳ ವಲಯ ತಾ। ಕುಷ್ಟಗಿ. 

ಬದಿಗೆ

ಶಾಲಾ ದಶಮಾನೋತ್ಸವ ತಯಾರಿ

ಶಾಲಾ ದಶಮಾನೋತ್ಸವ ತಯಾರಿ

ಶಾಲಾ ದಶಮಾನೋತ್ಸವ ತಯಾರಿಗಾಗಿ ಮಕ್ಕಳು ಮಣ್ಣಿನ ಮಾದರಿಗಳನ್ನು ಸಿದ್ದತೆ ಮಾಡುತ್ತಿರುವುದು. ಶಾಲಾ ಆವರಣದಲ್ಲಿಯೇ ಸಿಗುವ ಕಲ್ಲು ಮಣ್ಣುಗಳಿಂದ ಮಕ್ಕಳು ಮೂರ್ತಿಗಳನ್ನು ಮುಖವಾಡಗಳನ್ನು ತಯಾರಿ ನಡೆಸಲಾಗುತ್ತಿದೆ. ಮೂರ್ತಿಗಳು ಮಕ್ಕಳ ಸೃಜನಶೀಲ ಕಾರ್ಯಗಳನ್ನು ಹೊರಹೊಮ್ಮುವುದನ್ನು ನಾವು ಇಲ್ಲಿ ಕಾಣುತ್ತಾ ತಮ್ಮ ಪೂರ್ವಿಕರ ಸ್ವಾಗತವನ್ನು ಆಲಂಕರಿಕವಾಗಿ ನಡೆಸಲು ತುದಿಯುವುದನ್ನು ನಾವು ಇಲ್ಲಿ ಕಾಣಬಹುದು.

ಚಿತ್ರ

ನಾಟಕ ಪರಂಪರೆ

ನಾಟಕದ ಬಗ್ಗೆ ಎಲ್ಲರೂ ಮಾತಾಡಲು ಸುರುಮಾಡುತ್ತಾರೆ, ಕೆಲವರು ಹಾಗಿರಬೇಕಿತ್ತು ಹೀಗಿರಬೇಕಿತ್ತು ಎಂಬಿತ್ಯಾದಿ ಆಶಾವಾದದ ಉಚಿತ ಸಲಹೆಗಳನ್ನು ಕೊಡಲು ಪ್ರಾರಂಭಿಸುತ್ತಾರೆ. ನಾಟಕದ ತಳಹದಿ ಯಾವ ರೂಪದಲ್ಲೇ ಇರಲಿ ತಮ್ಮ ತಲೆಯೊಳಗಿನ ಚಿತ್ರದ ಗಡಿ ದಾಟಿಕೊಂಡು ನಾಟಕ ನೋಡುವುದೇ ಇಲ್ಲ. ಹಾಗೆ ಮಾತಾಡುವವರು ಚಿತ್ರಗಳ ಬಗ್ಗೆ ಮಾತಾಡುವುದಿಲ್ಲ, ಕವಿತೆಗಳ ಬಗ್ಗೆ ಮಾತಾಡುವುದಿಲ್ಲ ಶಿಲ್ಪಗಳ ಕುರಿತಾಗಿ ಮಾತಾಡುವುದಿಲ್ಲ..! ಆಶ್ಚರ್ಯವೆಂದರೆ ನಾಟ್ಯಭಂಗಿಗಳ ಬಗ್ಗೆ ಸಹಿತ ವಿವೇಚನೆ ಮಾಡುವುದಿಲ್ಲ. ಸಾಧಾರಣವಾಗಿ ನಾಟಕ ನೋಡಿದ ಮೇಲೆ ಒಂದು ಸಣ್ಣ ಚರ್ಚೆ ಇಟ್ಟಾಗ ಪ್ರೇಕ್ಷಕರಲ್ಲಿ ಕೆಲವು ಗೊಂದಲಗಳು ಏಳುತ್ತವೆ. ಅದ್ಯಾವದೋ ನೆನಪಿನ ಸುರುಳಿಯಲ್ಲಿ ಇಡೀ ನಾಟಕ ಗ್ರಹಿಸಿರುತ್ತಾರಾದ್ದರಿಂದ ಅದೇ ತೆರನಾದ ಭಾವಪ್ರಪಂಚದ ಒಳಹೊಗಲು ಪ್ರಯತ್ನಿಸುತ್ತಿರುತ್ತಾರೆ. ಒಮ್ಮೆ ರಸವತ್ತಾಗಿ ಅಭಿನಯಿಸಲ್ಪಟ್ಟ ನಾಟಕವೊಂದು ಮತ್ತೊಮ್ಮೆ ಅಷ್ಟೆ ರಸವತ್ತಾಗಿ ತಟ್ಟಬೇಕಾದ್ದು ಏನೂ ಇರುವುದಿಲ್ಲ. ಅದು ಸಂಪೂರ್ಣ ನಟ/ನಟಿಯ ಅಭಿವ್ಯಕ್ತಿಯಾಗಿ ರೂಪಗೊಳ್ಳುವುದು ಭಾವತುಂಬಿ ಅಬಿನಯಿಸಿದಾಗ ಮಾತ್ರ… ಆದರೆ ನಾವು ದಿನನಿತ್ಯದ ಬದುಕಿನಲ್ಲಿ ಅಂಥ ಭಾವಪೂರ್ಣವಾದ ಕ್ಷಣಗಳನ್ನ ಕಂಡಿದ್ದ ಕಾರಣಕ್ಕಾಗಿ ನಾಟಕ ನೋಡುಗನೊಂದಿಗೆ ಸಹ ಪ್ರಯಾಣ ಆರಂಭಿಸಿಬಿಟ್ಟಿರುತ್ತದೆ. ಅಷ್ಟು ಸಹಜವಾಗಿ ನಮ್ಮ ಒಳ-ಹೊರಗೇಕಾಗಿ ನಾಟಕದ ಎರಡು ಸಂವಹನಗಳು ಸಾಧ್ಯವಾಗುತ್ತಿರುತ್ತವೆ. ಅಂಥ ಸಂವಾದ ಬೇರೆ ಯಾವ ಮಾಧ್ಯಮದಿಂದ ಸಾಧ್ಯವಾಗಲಾರದು ಎಂದು ಹೇಳಲಾಗದು ಯಾಕಂದ್ರೆ ಆ ಎಲ್ಲ ಕಲಾಪ್ರಕಾರಗಳು ತನ್ನ ಅರಿವಿನ ವಿಸ್ತಾರದಲ್ಲಿ ಕೊಡುಕೊಳ್ಳುವ ಒಂದು ವ್ಯಾಪಾರ ಮನೋಧರ್ಮವನ್ನು ಬೆಳೆಸಿಕೊಂಡಿರುತ್ತವೆ.
ಈಗ ಹೊಸ ಹುಡುಗರು ಸಾಲುಗಟ್ಟಿ ನಾಟಕಕ್ಕೆ ಬರುತ್ತಿದ್ದಾರೆ. ವರ್ಷವೊಂದರಲ್ಲಿ ಕನ್ನಡ ರಂಗಭೂಮಿಯಲ್ಲಿ ಕನಿಷ್ಟ ಎಂಬತ್ತು ಜನ ಯುವಕರು ನಾಟಕದ ವಿಷಯದ ಮೇಲೆ ಡಿಪ್ಲೋಮ ಪದವಿ ಪಡೆದುಕೊಳ್ಳುತ್ತಾರೆ. ಇದೊಂದು ಸಂತಸದ ಸಂಗತಿ ಆದರೂ ಅವರ ಅಧ್ಯಯನ ಕ್ರಮದಲ್ಲಿ ಸಹಜತೆಗೆ ಹೊರತಾದ ಕೆಲ ಕೋತಿ ಚೇಷ್ಟೆಗಳು, ತಂತ್ರಗಳು, ಸಿದ್ಧಮಾದರಿಯ ಅಭಿನಯಗಳು ರೂಢಿಯಾಗಿಬಿಡುತ್ತವೆ. ಕನ್ನಡ ಅಕ್ಷರಗಳ ಸ್ಪಷ್ಟ ಉಚ್ಛಾರಣೆ ಕಲಿಸುವುದರೊಂದಿಗೆ ದೇಹಸಂಸ್ಕಾರ ಮಾಡಿಸುವುದರೊಳಗೆ ಅವರ ಕಲಿಕೆಯ ಆಸಕ್ತಿ ನಿಂತು ಹೋಗಿಬಿಟ್ಟಿರುತ್ತದೆ. (ಇದು ನನಗು ಅನ್ವಯಿಸುತ್ತದೆ) ಮುಂದೆ ಅವರ ಮುಖದ ಮುಂದಿನ ಕನಸುಗಳೆಲ್ಲ ಬೆಂಗ್ಳೂರು ಒಳಗೊಂಡು ರಚಿತವಾಗುವ ಕಾರಣಕ್ಕೋ ಏನೋ ಬಂದ ಯುವಕರು ಹಾಗೆ ಎಲ್ಲೋ ಕಾಣದಾಗಿಬಿಡುತ್ತಾರೆ. ಆ ಫ್ರೇಮ್ ಸಂಸ್ಕೃತಿಗೆ ಬೇಕಾದ ಅಭಿನಯದ ಮಾದರಿಯನ್ನ ಅವರು ಕಲಿಯದ ಕಾರಣಕ್ಕಾಗಿ ಏನೋ ಅವರು ಅಷ್ಟಾಗಿ ಸ್ಕ್ರೀನ್ ಮೇಲೆ ಕಾಣಿಕೊಳ್ಳುವುದಿಲ್ಲ. ಇದೆಲ್ಲ ಆಗುವ ಹೊತ್ತಿಗೆ ಅವರ ಉತ್ಸಾಹವೇ ಹಿಂಗಿ ತಾಂತ್ರಿಕ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿಬಿಡುತ್ತಾರೆ. ನೋಡಿ ರಂಗದ ಮೇಲೆ ನಿಂತು ನಾಟಕ ಮಾಡುವ ಹೊತ್ತಲ್ಲಿ ಅವರ ಅಭಿವ್ಯಕ್ತಿಗೆ ಬಹು ಆಯಾಮಗಳು ಒದಗಿ ಬಂದು ಪ್ರೇಕ್ಷಕರೊಳಗೆ ಹತ್ತೆಂಟು ಪ್ರಶ್ನೆಗಳನ್ನು ಪ್ರಚೋದಿಸಿದ ನಟ ಹೀಗೆ ಎಲ್ಲೋ ಕಾಣದಾದಾಗ ಕನ್ನಡ ರಂಗಭೂಮಿ ಪರಂಪರೆ ಆಗಿ ಉಳಿಯುವುದಾದರೂ ಹೇಗೆ? ಅದಿರಲಿ ನಟನೊಬ್ಬ ಹತ್ತೆಂಟು ವರ್ಷಗಳ ಕಾಲ ಬರೀ ನಾಟಕದ ಸಾಧನೆಯೊಳಗೆ ಬದುಕಿ ಉಳಿಯುವುದು ಕಷ್ಟ, ಯಾವನೋ ಒಬ್ಬ ಹಾಗೆ ಬದುಕುತ್ತೇನೆಂದು ಹಠ ಹಿಡಿದರೂ ಅವನ ಸ್ವಂತ ಬದುಕಿನ ಸಂಕಟಗಳನ್ನು ಯಾವ ಮುಖವಾಣಿಯಲ್ಲಿ ಹೇಳಿಕೊಳ್ಳಬೇಕು? ಇನ್ನು ಕೆಲ ನಟರು ಹೊಟ್ಟೆ-ಬಟ್ಟೆಗೆ ಬೇರೆ ಬೇರೆ ಕೆಲಸಗಳನ್ನು ನಚ್ಚಿಕೊಂಡು ಬಿಡುವಿನ ಸಂದರ್ಭದಲ್ಲಿ ನಾಟಕ ಮಾಡುತ್ತ ಬಂದಿದ್ದಾರೆ. ಅಂಥವರು ಸಹಿತ ಈ ತರಬೇತಾದ ಹೊಸ ಹುಡುಗರನ್ನ ಕೊಂಚ ‘ಏನು ಮಾಡುತ್ತಾರೋ ನೋಡೋಣ’ ಎಂಬ ವಕ್ರದೃಷ್ಟಿಯಲ್ಲಿ ನೋಡುವಾಗ ಅವರ ಪರಂಪರೆ ಇವರಿಗೆ ಬಳುವಳಿಯಾಗಿ ಬರುವುದಾದರೂ ಹೇಗೆ ಸಾಧ್ಯ? ಇನ್ನು ತರಬೇತಾದ ಕೆಲವರು ಹವ್ಯಾಸವೆಂದು ನಾಟಕ ಮಾಡುವವರನ್ನು ಗರ್ವದಿಂದ ನೋಡುವುದೂ ಒಂದಿದೆ… ಅದು ತಾವು ಆ ಕುರಿತಾಗಿ ತಿಳುವಳಿಕೆ ಉಳ್ಳವರು ಎಂಬ ಸೊಕ್ಕು ಅದು-ಹಾಗಂದ ಮಾತ್ರಕ್ಕೆ ಅವರನ್ನು ದೂರಿಕೊಂಡು ಅವರು ಅಲ್ಲಿ ಓದಿದವರು ಇವರು ಇಲ್ಲಿ ಓದಿದವರು ಎಂದು ಮಾತೃ ಸಂಸ್ಥೆಯೊಂದಿಗಿನ ಇವರ ಹೊಟ್ಟೆಕಿಚ್ಚನ್ನ ಹೊಸ ಹುಡುಗರ ಮೇಲೆ ತೀರಿಸಿಕೊಳ್ಳಲು ಪ್ರಯತ್ನಿಸುವುದು ಇದ್ದೆ ಇರುತ್ತದೆ. ಇದೆಲ್ಲದರ ನಡುವೆ ಹೊಸ ತಲೆಮಾರಿನ ನಮಗೆಲ್ಲ ನಾಟಕ ಪರಂಪರೆಯಾಗಿ ಉಳಿಸಬೇಕೆಂಬ ಆಶಯವೇನೋ ಇದೆ..1 ಆದರೆ ಕನ್ನಡದ ನಟನಾ ಪರಂಪರೆ ಗಟ್ಟಿಯಾಗುಳಿಯಲು ನಮ್ಮ ನೆಲದ ಒಂದು ಅಭಿನಯ ಪದ್ಧತಿ ಕುರಿತಾದ ಸಂಶೋಧನೆ ಆಗಲಾರದ ಹೊರತು ಮತ್ತು ನಾಟಕದಲ್ಲಿ ನಟಿಸುವ ನಟನಿಗೆ ಪಗಾರ ಸಿಗದ ಹೊರತು ನಾಟಕ ಪರಂಪರೆಯಾಗಿ ಉಳಿಯಲಾರದು. ನಾಲ್ಕು ನಾಟಕ ಮಾಡಿದವ ನಿರ್ದೇಶನ ಮಾಡಲು ಆರಂಭಿಸುತ್ತಾನೆ. ತನ್ನದೇ ಆದ ಸರ್ಕಲ್ಲೊಂದರ ಮೂಲಕ ಪ್ರಚಾರಕ್ಕೆ ಬಿದ್ದು ಶ್ರೇಷ್ಟತೆಯ ಗುಂಗಿನಲ್ಲಿ ಮುಳುಗಿಬಿಡುತ್ತಾನೆ. ಅಂಥವರೆಲ್ಲ ನಾಟಕ ಪರಂಪರೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಾರರು. ಹೌದು ನಾಟಕ ಪರಂಪರೆ ಆಗಲೇಬೇಕು.

Previous Older Entries Next Newer Entries